Sirsi: ಭಗವಂತ ಒಲಿಯುವುದು ಶುದ್ಧ ಭಕ್ತಿಗೆ ಮಾತ್ರ: ಭಟ್ಟಾಕಳಂಕ ಭಟ್ಟಾಚಾರ್ಯ ಶ್ರೀ
Thursday, March 19, 2026
ಶಿರಸಿ : ಯುಗಾದಿ ಉತ್ಸವ ಸಮಿತಿಯ 28ನೇ ವರ್ಷದ ಯುಗಾದಿ ಉತ್ಸವ ಇಂದು ನಗರದ ವಿಕಾಸಆಶ್ರಮ ಬಯಲಿನಲ್ಲಿ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಶಿರಸಿ ಬಣ್ಣದಮಠ ಶ್ರೀ ಶಿವಲಿಂಗ ಸ್ವಾಮೀಜಿ, ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.ಸೋಂದ ಜೈನ ಮಠದ ಶ್ರೀ ಭಟ್ಟಾಕಳಂಕ ಭಟ್ಟಾಚಾರ್ಯ ಸ್ವಾಮೀಜಿಗಳು ಮಾತನಾಡಿ ಭಗವಂತ ನಂಬಿದವರಿಗೆ ಕೈ ಬಿಡುವುದಿಲ್ಲ. ಅಲ್ಲದೆ ಭಗವಂತ ಅಧಿಕಾರಸ್ತರಿಗೆ, ಶ್ರೀಮಂತರಿಗೆ, ಬಡವರಿಗೆ... ಹೀಗೆ ಒಲಿಯುತ್ತಾನೆಂದು ತಿಳಿಯಬಾರದು. ಭಗವಂತ ಒಲಿಯುವದು ಶುದ್ಧ ಭಾವ ಭಕ್ತಿಗೆ ಮಾತ್ರ ಎಂದು ಅವರು ತಿಳಿಸಿದರು.ಜನರಲ್ಲಿ ಆದ್ಯಾತ್ಮಿಕ ಚಿಂತನೆ ಹುರಿಗಟ್ಟಬೇಕಾಗಿದೆ ಎಂದು ಕರೆ ನೀಡಿದ ಅವರು ಮನುಷ್ಯ ತನ್ನಲ್ಲಿ ತಾನು ಶುದ್ಧಗೊಳ್ಳಬೇಕು,