udupi ಬೈಂದೂರು: ಕೆಂಪು ಮಣ್ಣು ತುಂಬಿದ ಟಿಪ್ಪರ್ ಬೈಕಿಗೆ ಡಿಕ್ಕಿ: ಬೈಕ್ ಸವಾರ ಸಾವು
Wednesday, June 3, 2026
ಬೈಂದೂರು: ಸಮೀಪ ಗಂಗನಾಡು ಎಂಬಲ್ಲಿ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ
ಹೌದು 3/6/2026 ರ ಸಂಜೆ 6.45 ಕೆ ಬೈಂದೂರು ಗಂಗಾನಾಡು ರಸ್ತೆಯ ಸೂರ್ಕುಂದ ಎಂಬಲ್ಲಿ ವೇಗವಾಗಿ ಕೆಂಪು ಮಣ್ಣು ತುಂಬಿಸಿಕೊಂಡು ಬಂದಂತ ಟಿಪ್ಪರ್ ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಮಹಾಬಲ ಪೂಜಾರಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮೃತ ವ್ಯಕ್ತಿ ಪಡುವರಿ ನಿವಾಸಿ ಆಗಿದ್ದು ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ನಡೆದ ಘಟನೆ ಎನ್ನಲಾಗಿದೆ
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ
ವರದಿ: ಉದಯ್ ನಾಯ್ಕ್ ಗಂಗನಾಡು