Bainduru: ಶ್ರೀರಾಮ ಮಂದಿರ ಮರವಂತೆ 93 ಈ ವರ್ಷದ ಶ್ರೀ ರಾಮ ಭಜನೆ ಕಾರ್ಯಕ್ರಮ, ಶ್ರೀ ಲಕ್ಷ್ಮಣ ದೇವರಿಗೆ ಸುವರ್ಣ ಕಿರೀಟ ಸಮರ್ಪಣೆ ನಡೆಯಲಿದೆ 20-03-2026 ಶುಕ್ರವಾರ
Thursday, March 19, 2026
ಬೈಂದೂರು: ತಾಲೂಕಿನ ಶ್ರೀರಾಮ ಮಂದಿರ ಮರವಂತೆ ಯಲ್ಲಿ ಮೀನುಗಾರರು ಆರಾಧಿಸಿ ಪೂಜಿಸಿ ನಂಬಿಕೊಂಡು ಬಂದಂತ ಶ್ರೀ ರಾಮ ಭಜನೆ ಮಂದಿರದ 93ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ನಡೆಯುವ ಅದ್ಭುತ ಧಾರ್ಮಿಕ ಕಾರ್ಯಕ್ರಮ ದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ
ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ
ಹೌದು ಪ್ರಪ್ರಥಮ ಬಾರಿಗೆ ಮೀನುಗಾರರು ಶ್ರೀ ರಾಮ ಮಂದಿರ ವತಿಯಿಂದ ಶ್ರೀ ರಾಘವೇಶ್ವರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ 20-3-2026 ಶುಕ್ರವಾರ ಮಧ್ಯಾಹ್ನ 2:30ಕ್ಕೆ
"ಶ್ರೀ ಲಕ್ಷ್ಮಣ ದೇವರಿಗೆ ಸುವರ್ಣ ಕಿರೀಟ ಸಮರ್ಪಣೆ"ಹಾಗೂ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ನಡೆಯಲಿದೆ
ಶ್ರೀಗಳ ಆಶೀರ್ವಚನ ಹಾಗೂ ಭಕ್ತಾದಿಗಳಿಗೆ ವಿಷ್ಣು ಸಹಸ್ರನಾಮ ಪುಸ್ತಕವನ್ನು ವಿತರಿಸಲಾಗುವುದು
28-03-2026 ನೇ ಶನಿವಾರದ ವರೆಗೆ ನಿರಂತರ ಶ್ರೀರಾಮ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ, ಈ ಎಲ್ಲಾ ಕಾರ್ಯಕ್ರಮಕ್ಕೂ ಭಕ್ತರು ಹಾಗೂ ಸಾರ್ವಜನಿಕರು ವಿವಿಧ ಸಂಘಟನೆಯ ಸದಸ್ಯರು, ಆಗಮಿಸಬೇಕೆಂದು ಶ್ರೀ ರಾಮ ಮುಂದಿರ ಮರವಂತೆ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಪದಾಧಿಕಾರಿಗಳು ವಿನಂತಿ ಮಾಡಿಕೊಂಡಿದ್ದಾರೆ