Aಯಲ್ಲಾಪುರ: ವಿದ್ಯುತ್ ಸ್ಪರ್ಶಕ್ಕೆ ವೃದ್ಧ ಸಾವು
Thursday, December 4, 2025
ಯಲ್ಲಾಪುರ*:ಮನೆಯಲ್ಲಿ ಮಜ್ಜಿಗೆ ಕಡಿಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ವೃದ್ದರೊಬ್ಬರು ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕು ಸಾ :ನಾಗರಖಾನ ಬಿಸಗೋಡ ನಲ್ಲಿ ಸಂಭವಿಸಿದ ಬಗ್ಗೆ ವರದಿಯಾಗಿದೆ.ವಿಶ್ವೇಶ್ವರ ವೆಂಕಟರಮಣ ಭಟ್ (73) ಇವರು ನಿನ್ನೆ ದಿನಾಂಕ ಮೂರರಂದು ಮನೆಯಲ್ಲಿ ವಿದ್ಯುತ್ ಚಾಲಿತ ಮಿಷನ್ ನಲ್ಲಿ ಮಜ್ಜಿಗೆ ಕಡೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.