ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ಸ್ - 2025 ಎ/ಕೆ ವಿಭಾಗದ ಸ್ಪರ್ಧೆಯಲ್ಲಿ ವೈಷ್ಣವ್ ವಿ. ಖಾರ್ವಿ ಗಂಗೊಳ್ಳಿ ಪ್ರಥಮ ಸ್ಥಾನ
Tuesday, October 28, 2025
ಬೈಂದೂರು: ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಕೆ.ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ಸ್ - 2025 ಸ್ಪರ್ಧೆಯಲ್ಲಿ ಗಂಗೊಳ್ಳಿ ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವೈಷ್ಣವ್ ವಿ.ಖಾರ್ವಿ ಎ/ಕೆ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.   ಈತನಿಗೆ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕುಂದಾಪುರ ಸೆಂಟರ ಪ್ರಸನ್ನ, ಮಹಾಲಕ್ಷ್ಮೀ ಮತ್ತು ಶಿಕ್ಷಕಿ ಸುನೀತಾ ತರಬೇತಿ ನೀಡಿದ್ದಾರೆ ಎಎನ್ನಲಾಗುತ್ತಿದೆ 
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ  ಕೊಡಪಾಡಿ  ಕಂಚುಗೋಡು ಭಗತ್ ನಗರ ವಾಸುದೇವ ಖಾರ್ವಿ ಮತ್ತು ತಾರಾ ವಿ. ಖಾರ್ವಿ ದಂಪತಿ ಪುತ್ರ.
ಈ ಸಾಧನೆಯಿಂದ ಊರಿಗೆ ಹಾಗೂ ವೈಷ್ಣವಿ ಯವರ ತಂದೆ ತಾಯಿಗೆ ಊರಿನ ಸಮಸ್ತ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ