ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura :  16 ಪ್ರಕರಣದಲ್ಲಿ ಬೇಕಾಗಿರುವ ನಟೋರಿಯಸ್ ಗೋ ಕಳ್ಳತನದ  ಆರೋಪಿಯನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು !! ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ

Kundapura : 16 ಪ್ರಕರಣದಲ್ಲಿ ಬೇಕಾಗಿರುವ ನಟೋರಿಯಸ್ ಗೋ ಕಳ್ಳತನದ ಆರೋಪಿಯನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು !! ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ

ದಾಮೋದರ ಮೊಗವೀರ ಸಾರಥ್ಯದಲ್ಲಿ:

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ಬುಧವಾರದಂದು ಮಧ್ಯ ರಾತ್ರಿಯ ವೇಳೆ ಮೇಲ್ ಗಂಗೊಳ್ಳಿ ಸಮೀಪ ರಸ್ತೆಯ ಬದಿಯಲ್ಲಿ ಮಲಗಿರುವ ಜಾನುವಾರುಗಳನ್ನು ಕದ್ದು  ಕ್ರೆಟಾ ಕಾರಿನಲ್ಲಿ ತುಂಬಿಕೊಂಡು ಪರಾರಿ ಯಾಗಿದ್ದ  ಆರೋಪಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪವನ್ ನಾಯಕ್ ಮಂಗಳೂರು ನಗರದ ಕುಳಾಯಿ ಎಂಬಲ್ಲಿ ಆರೋಪಿಯನ್ನು ಸಿನಿಮಿಯಾ ರೀತಿಯಲ್ಲಿ ಬಂಧಿಸಿದ್ದಾರೆ, 
ಈತ ಮಂಗಳೂರು ಉಡುಪಿ, ಉತ್ತರ ಕರ್ನಾಟಕ, ಚಿಕ್ಕಮಗಳೂರು , ಹಾಸನ, ಭಾಗದಲ್ಲಿ ಅಕ್ರಮ ಗೋಮಾಂಸ ಮತ್ತು ಗೋ ಸಾಗಾಟ 16 ಪ್ರಕರಣದಲ್ಲಿ ಬೇಕಾಗಿರುವ ನಟೋರಿಯಸ್ ಆರೋಪಿ ಅನ್ಸರ್ ತೋಡಾರ ನನ್ನು ಬುಧವಾರ ರಾತ್ರಿಯ ವೇಳೆ ಗಂಗೊಳ್ಳಿ ಠಾಣೆಯ ಉಪ ನಿರೀಕ್ಷಕ ಪವನ್ ನಾಯಕ್ ಮತ್ತು ಸಿಬ್ಬಂದಿಗಳು ಬಂಧಿಸಿ ಗುರುವಾರ ಬೆಳಿಗ್ಗೆ  ಗಂಗೊಳ್ಳಿ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಮಾಡಿರುವ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಹಾಗೂ ಉಳಿದ ಮೂವರು ಆರೋಪಿಗಳ ಹೆಸರು ಜುಬೇರ್ ಯಾನೆ ಜುಮ್ಕಿ ಜುಬೇರ್ , ಆರೀಫ್ ಮತ್ತು ಇಕ್ಬಾಲ್ ಯಾನೆ ಕರಿ ಇಕ್ಬಾಲ್ ಆರೋಪಿಗಳ ಹೆಸರು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ, ಸಂಜೆಯ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಹಾಗೂ ಸೋಮವಾರದಂದು ಮತ್ತೆ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಕಷ್ಟಡಿಗೆ ತೆಗೆದುಕೊಳ್ಳುವ ಮಾಹಿತಿ ಇದೆ ಎಂದು ತಿಳಿದುಬಂದಿದೆ,

ಮೂವರು ಆರೋಪಿಗಳ ಹೆಡೆಮುರಿ ಕಟ್ಟಲು ಗಂಗೊಳ್ಳಿ ಪೊಲೀಸರ  ಶೋಧ ಕಾರ್ಯಾಚರಣೆ ಮುಂದುವರಿದಿದೆ, 
ಗಂಗೊಳ್ಳಿ ಪೊಲೀಸರ ಸಾಹಸಮಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ, ಹಾಗೂ ಉಡುಪಿ ಜಿಲ್ಲೆಯ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ, ಗಂಗೊಳ್ಳಿ ಪೊಲೀಸರ ಕಾರ್ಯಾಚರಣೆಯಿಂದ  ಉಡುಪಿ ಜಿಲ್ಲೆಗೆ ಮತ್ತು ಪೊಲೀಸ್ ಇಲಾಖೆಗೆ ಹೆಗ್ಗಳಿಕೆಗೆ ಪಾತ್ರವಾಗಿದೆ, 

ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಕ್ರೆಟಾ ಕಾರ್ ( ಅಂದಾಜು ಮೌಲ್ಯ 6 ಲಕ್ಷ ರೂಪಾಯಿ) ಹಾಗೂ 1 ಮೊಬೈಲ್ ಫೋನ್ ಗಳನ್ನು (ಅಂದಾಜು ಮೌಲ್ಯ 5 ಸಾವಿರ) ಸ್ವಾದೀನಪಡಿಸಿಕೊಳ್ಳಲಾಗಿದೆ.

ಈ ಕಾರ್ಯಚರಣೆಯಲ್ಲಿ ರಾಘವೇಂದ್ರ ಪೂಜಾರಿ,  ಕೃಷ್ಣ ದೇವಾಡಿಗ, ಸಂದೀಪ್ ಕುರಾಣಿ, ಶಾಂತರಾಮ್ ಶೆಟ್ಟಿ, ರಾಜು ನಾಯ್ಕ್, ಪ್ರಸನ್ನ, ಚೇತನ, ಮಾಳಪ್ಪ ದೇಸಾಯಿ ಚಿದಾನಂದ ಕಾರ್ಯಚರಣೆಯಲ್ಲಿ  ಭಾಗಿಯಾಗಿದ್ದರು

Ads on article

Advertise in articles 1

advertising articles 2

Advertise under the article