ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 ಕುಂದಾಪುರ: ವಿಶ್ವ ಪವರ್ ಲಿಫ್ಟಿಂಗ್   ಚಾಂಪಿಯನ್ ಶಿಪ್ ಗೆ  ಭಾರತದ ಪ್ರತಿನಿಧಿಯಾಗಿ ಆಯ್ಕೆಯಾದ ಡಾ. ಸತೀಶ್ ಖಾರ್ವಿ ಯವರಿಗೆ ಎಸ್ಪಿ ಹರಿರಾಂ ಶಂಕ‌ರ್ ಅವರಿಂದ ಅಭಿನಂದನೆ

ಕುಂದಾಪುರ: ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾದ ಡಾ. ಸತೀಶ್ ಖಾರ್ವಿ ಯವರಿಗೆ ಎಸ್ಪಿ ಹರಿರಾಂ ಶಂಕ‌ರ್ ಅವರಿಂದ ಅಭಿನಂದನೆ

ಕುಂದಾಪುರ: ಅಂತರಾಷ್ಟ್ರೀಯ ಕ್ರೀಡಾಪಟು ಕುಂದಾಪುರದ ಖಾರ್ವಿಕೇರಿ ನಿವಾಸಿ ಡಾ. ಸತೀಶ್ ಖಾರ್ವಿ ಅವರನ್ನು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅಭಿನಂದಿಸಿದ್ದಾರೆ.

ಡಾ. ಸತೀಶ್ ಖಾರ್ವಿ ಅವರ ಪವರ್ ಲಿಫ್ಟಿಂಗ್ ಕ್ರೀಡಾ ಸಾಧನೆ ಮಾಡಿದ ಪದಕವನ್ನು ನೋಡಿ ಹಾಗೂ ಸೌತ್ ಆಫ್ರಿಕಾದಲ್ಲಿ ನಡೆಯುವ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ -2025 ಸ್ಪರ್ಧೆಗೆ ಆಯ್ಕೆಯಾಗಿರುವುದಕ್ಕೆ ಉಡುಪಿ ಜಿಲ್ಲೆಯ ಜನತೆಯ ಪರವಾಗಿ ಹರಿರಾಂ ಶಂಕರ್ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಂಸ್ಥೆಯ ರಾಜ್ಯಾಧ್ಯಕ್ಷ ರಾಘವೇಂದ್ರ ಶೆಟ್ಟಿ ಜೊತೆಯಲ್ಲಿ ಅಭಿನಂದಿಸಿದರು.
ಇವರ ಕ್ರೀಡಾ ಸಾಧನೆಯಿಂದ ಉಡುಪಿ ಜಿಲ್ಲೆಗೆ ಗೌರವ ಇನ್ನಷ್ಟು ಹೆಚ್ಚಾಗಿದೆ ಇವರ ಸಾಧನೆಯನ್ನು ನೋಡಿ ಜಿಲ್ಲಾಧ್ಯಂತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article