bendur ಕೆರಾಡಿ ಗ್ರಾ.ಪಂ. ಹಯ್ಯಂಗರ್ ಎಂಬಲ್ಲಿ ಬಿ ಎಸ್ ಎನ್ಎಲ್ ಟವರ್ ಉದ್ಘಾಟನೆ; .
Monday, November 24, 2025
ಬೈಂದೂರು:
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಯ್ಯಂಗರ್ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿಎಸ್ಎನ್ಎಲ್ ಟವರ್ ಉದ್ಘಾಟನೆ ಕಾರ್ಯಕ್ರಮ ಸೋಮವಾರ ಬೆಳಗ್ಗೆ ಮಾಡಲಾಯಿತು
ಈ ಟವರ್ ಆರಂಭದಿಂದ ಹಯ್ಯಂಗರ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಮೊಬೈಲ್ ಸಂಪರ್ಕ ಹಾಗೂ ಡಿಜಿಟಲ್ ಸೇವೆಗಳ ಸುಲಭ ಲಭ್ಯತೆ ಸಿಗಲಿದೆ.
ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ ಅವರು, ಮಂಡಲ ಅಧ್ಯಕ್ಷರಾದ ಶ್ರೀಮತಿ ಅನಿತಾ ಆರ್. ಕೆ., ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ನಮ್ಮ ಗುರಿ — ಪ್ರತಿ ಗ್ರಾಮಕ್ಕೂ ನಿಶ್ಚಿತ ಸಂಪರ್ಕ, ಉತ್ತಮ ಸೇವೆಗಳು ಮತ್ತು ಸಮಗ್ರ ಅಭಿವೃದ್ಧಿ! ಎಂದ ಸಂಸದ ಬಿ ವೈ ರಾಘವೇಂದ್ರ