ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS/ಬೈಂದೂರು:  ಚಾತುರ್ಮಾಸ ವ್ರತ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ದರ್ಶನ ಪಡೆದು ಆಶೀರ್ವಾದ ಪಡೆದ ಕರವೇ ಸೈನಿಕರು.

COSTALNEWS/ಬೈಂದೂರು: ಚಾತುರ್ಮಾಸ ವ್ರತ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ದರ್ಶನ ಪಡೆದು ಆಶೀರ್ವಾದ ಪಡೆದ ಕರವೇ ಸೈನಿಕರು.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಬಿಳಿ ಶಿಲೆ ಗಣಪತಿ ದೇವಸ್ಥಾನದಲ್ಲಿ ಕಳೆದ ಹಲವು ದಿನಗಳಿಂದ ವಿಜ್ರಂಭಣೆಯಿಂದ ನಡೆಯುತ್ತಿರುವ ಚಾತುರ್ಮಾಸ ವ್ರತ ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭೇಟಿ ನೀಡಿದ್ದಾರೆ. ಕರವೇ ಕುಂದಾಪುರ ತಾಲೂಕು ಅಧ್ಯಕ್ಷ ಶಿವ ಆರ್. ಪೂಜಾರಿ ಹಾಗೂ ಅವರ ತಂಡ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ದರ್ಶನ ಪಡೆದು, ಫಲ-ಪುಷ್ಪ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡಿದೆ.
ಬೈಂದೂರು ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರವೇ ಸೈನಿಕರನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳು ಸದ್ಯ ಭರದಿಂದ ಸಾಗುತ್ತಿವೆ.
ಇದರ ಭಾಗವಾಗಿ, ಗೋಳಿಹೊಳೆ ಬಿಳಿ ಶಿಲೆ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ ವ್ರತದ ಧಾರ್ಮಿಕ ಕಾರ್ಯಕ್ರಮಕ್ಕೆ ಕರವೇ ತಂಡ ಭೇಟಿ ನೀಡಿತು. ಈ ವೇಳೆ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಮುಖಂಡರು, ಸಂಘಟನೆಯ ಬೆಳವಣಿಗೆಗೆ ಗುರುಗಳ ಶುಭ ಹಾರೈಕೆ ಪಡೆದುಕೊಂಡರು.
ಈ ಧಾರ್ಮಿಕ ಹಾಗೂ ಸಾಂಘಿಕ ಭೇಟಿಯ ಸಂದರ್ಭದಲ್ಲಿ:
ಕರವೇ ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ: ಪುರುಷೋತ್ತಮ್ ಪೂಜಾರಿ
ಕರವೇ ಮುಖಂಡರು: ಗುರು ಖಾರ್ವಿ, ಚೇತನ್ ಖಾರ್ವಿ
ಪತ್ರಕರ್ತರು: ದಾಮೋದರ್ ಮೊಗವೀರ ನಾಯಕವಾಡಿ
ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article