ಬೈಂದೂರು: ಚಿತ್ತೂರಿನ ಹಯಾತುಲ್ ಇಸ್ಲಾಂ ಅರೇಬಿಕ್ ಸ್ಕೂಲ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ
Saturday, August 15, 2026
ಬೈಂದೂರು: ಚಿತ್ತೂರಿನ ಸ್ಥಳೀಯ ಜನಪ್ರಿಯ ವೈದ್ಯರು ಪರಿಸರ ಪ್ರೇಮಿಗಳು ಆದ ಡಾ. ಅತುಲ್ ಕುಮಾರ್ ಶೆಟ್ಟಿ ಯವರು ಧ್ವಜಾರೋಹಣಗೈದರು,
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಹಾಗೂ ತಾಲೂಕ ಪಂಚಾಯತ್ ಮಾಜಿ ಸದಸ್ಯರಾದ ಉದಯ ಜಿ ಪೂಜಾರಿಯವರು ಸ್ವಾತಂತ್ರ್ಯದ ದಿನಾಚರಣೆಯ ಶುಭ ಹಾರೈಸಿದರು, ವಂಡ್ಸೆ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ರಜಾಕ್ ಮುಸ್ಲಿಯರ್ ಅವರು ಶುಭ ಆಶಂಸನೆ ಗೈದರು,
ವಿದ್ಯಾರ್ಥಿ ಗಳು ಹಾಗೂ ಯುವ ಜನತೆಗೆ ಹಕೀಮ್ ಉಸ್ತಾದ್ ಪ್ರತಿಜ್ಞಾವಿಧಿ ಭೋದಿಸಿದರು, ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು, ರಿಕ್ಷಾ ಚಾಲಕ ಮಾಲಕ ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಪೂಜಾರಿ, ಅರೇಬಿಕ್ ಸ್ಕೂಲ್ ಅಧ್ಯಕ್ಷರಾದ ಇಕ್ಬಾಲ್, ಮಾಜಿ ಅಧ್ಯಕ್ಷರುಗಳಾದ ಕೆ. ಅಬ್ದುಲ್ ರೆಹಮಾನ್,ಹಂಝ ಸಾಹೇಬ್, ಮೊಹಮ್ಮದ್ , ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು,