UK ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ವೇಳೆ ಆಡಳಿತ ಮಂಡಳಿಯಿಂದ ಬಂಗ್ಲೆ ದಂಪತಿಗೆ ಸನ್ಮಾನ
Thursday, June 11, 2026
ಈ ಸಂದರ್ಭ ಶಿರಸಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಶಿರಸಿ ತಾಲೂಕು ಅಧ್ಯಕ್ಷರಾದ ರಾಜೇಶ್ ಕಾರ್ಯದರ್ಶಿಗಳಾದ ಆನಂದಶೆಟ್ಟಿ ಹಾಗೂ ಅನೇಕ ಪದಾಧಿಕಾರಿಗಳ ಪ್ರೀತಿ ವಿಶ್ವಾಸ ಹಾಗೂ ಸಹಕಾರದಿಂದ ಆಗಮಿಸಿದಂತ ದಂಪತಿಗಳಿಗೆ ಗುರುವಾರ ವಿಶೇಷ ಪೂಜೆಯೊಂದಿಗೆ ದೇವಿಯ ಶ್ರೀ ಮಾರಿಕಾಂಬ ಟ್ರಸ್ಟ್ ವತಿಯಿಂದ ಸನ್ಮಾನದ ಜೊತೆಗೆ ದೇವಿಯ ಪೋಟೋವನ್ನು ಕಾಣಿಕೆಯಾಗಿ ಮಾರಿಕಾಂಬೆ ದೇವಸ್ಥಾನದ ವ್ಯವಸ್ಥಾಪಕರು ನೀಡಿದರು
ಜೊತೆಗೆ ಬಂದಂತ ಪ್ರತಿಯೊಬ್ಬ ಪತ್ರಕರ್ತರಿಗೂ ಕಷಾಯ ನೀಡುವುದರೊಂದಿಗೆ ಆತಿಥ್ಯ ನೀಡಲಾಗಿತ್ತು.
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದು, ದೇವಿಯ ಆಶೀರ್ವಾದದ ಸ್ಮರಣಿಕೆಯೊಂದಿಗೆ ಬಂಗ್ಲೆ ದಂಪತಿಯನ್ನು ಗೌರವಿಸಿದರು. ಧಾರ್ಮಿಕ, ಸಾಮಾಜಿಕ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಮೆಚ್ಚಿ ಈ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಊರಿನ ಮುಖಂಡರು ಹಾಜರಿದ್ದರು