ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

honnavar   ಗೇರಸೊಪ್ಪ  ವಲಯ ಅರಣ್ಯ ಅಧಿಕಾರಿಗಳ ಕಿರುಕುಳ ಆರೋಪ: ಚಾಲಕ–ಪತ್ನಿ ಆತ್ಮಹತ್ಯೆ ಪತ್ರ ಬರೆದು ಕಾಣೆಯಾದ ದಾರುಣ ಘಟನೆ

honnavar ಗೇರಸೊಪ್ಪ ವಲಯ ಅರಣ್ಯ ಅಧಿಕಾರಿಗಳ ಕಿರುಕುಳ ಆರೋಪ: ಚಾಲಕ–ಪತ್ನಿ ಆತ್ಮಹತ್ಯೆ ಪತ್ರ ಬರೆದು ಕಾಣೆಯಾದ ದಾರುಣ ಘಟನೆ

ಹೊನ್ನಾವರ-ಅಧಿಕಾರಿಗಳ ವರ್ತನೆ ತಾಳಲಾಗದೆ ರಾಜ್ಯ ಸರ್ಕಾರಿ ಅರಣ್ಯ ಇಲಾಖೆಯೊಂದರಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಪತ್ನಿಯೊಂದಿಗೆ ಮನೆಯಿಂದ ಹೊರಟಿದ್ದು, ಆತ್ಮಹತ್ಯೆಯ ಸೂಚನೆ ಇರುವ ಪತ್ರವೊಂದು ಪತ್ತೆಯಾಗಿದೆ.
ಹೊನ್ನಾವರದ ಗೇರಸೊಪ್ಪ ವಲಯ ಅರಣ್ಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ನಾಯ್ಕ ಅವರು ಸೇವೆಯ ವೇಳೆ ಅನುಭವಿಸಿದ ಅನ್ಯಾಯ ಹಾಗೂ ಅಧಿಕಾರಿಗಳ ಒತ್ತಡದ ಬಗ್ಗೆ ತಮ್ಮ ಕೈಬರಹದ ಪತ್ರದಲ್ಲಿ ವಿವರಿಸಿದ್ದಾರೆ. ಮನೆಯಲ್ಲಿಟ್ಟಿರುವ ಆ ಪತ್ರಕ್ಕೆ ಅವರ ಪತ್ನಿ ವೀಣಾ ಪೂಜಾರಿ ಸಹ ಸಹಿ ಹಾಕಿರುವುದು ಕಂಡುಬಂದಿದೆ. ಪ್ರಸ್ತುತ ದಂಪತಿ ಇಬ್ಬರೂ ಸಂಪರ್ಕಕ್ಕೆ ಸಿಗದೇ ಇದ್ದುದರಿಂದ ಕುಟುಂಬ ಮತ್ತು ಪೊಲೀಸರು ಚಿಂತೆ ವ್ಯಕ್ತಪಡಿಸಿದ್ದಾರೆ.

ಮಂಜುನಾಥ ಗಣಪತಿ ನಾಯ್ಕ ಅವರು ಕೆರೆಕೋಣದವರು. ಸುಮಾರು ಮೂರು ದಶಕಗಳಿಂದ ಗೇರುಸೊಪ್ಪ ವಲಯದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷyarದೆಗಳಿಂದ ಅಧಿಕಾರಿಯಾಗಿ ಕೆಲಸ ನೋಡುತ್ತಿದ್ದ ಕಾರ್ತಿಕ ಕಾಂಬ್ಳೆ ಅವರ ವಿರುದ್ಧ ಮಂಜುನಾಥ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪತ್ರದಲ್ಲಿ, “ವಾಹನವನ್ನೇ ನಡೆಸಬೇಕಾದ ನನಗೆ ಅಡುಗೆ ಕೆಲಸ ಮಾಡಲು ಬಲವಂತ ಮಾಡಲಾಗುತ್ತಿದೆ. ನನ್ನಿಂದ ಅದು ಸಾಧ್ಯವಿಲ್ಲವೆಂದು ಹೇಳಿದರೂ ಒತ್ತಡ ಮುಂದುವರಿದಿದೆ” ಎಂದು ಅವರು ನೋವಿನೊಂದಿಗೆ ಬರೆದಿದ್ದಾರೆ.

ಡಿಎಫ್‌ಓ ಯೋಗೀಶ ಅವರಿಗೆ ಸಮಸ್ಯೆ ತಿಳಿಸಿದರೂ ಯಾವುದೇ ಕ್ರಮವಾಗಲಿಲ್ಲ ಎಂದು ಮಂಜುನಾಥ ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ, “ನನ್ನ ಪತ್ನಿಯ ಮಾನಸಿಕ ಸಮಸ್ಯೆಯನ್ನು ಬಳಸಿಕೊಂಡು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಅಧಿಕಾರಿಗಳು ಬೆದರಿಸಿದ್ದಾರೆ” ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಪತ್ರದ ಕೊನೆಯಲ್ಲಿ, “ಈ ಬರಹ ನಿಮಗೆ ತಲುಪುವಷ್ಟರಲ್ಲಿ ನಾವು ಬದುಕಿರುವ ಸಂಭವ ಕಡಿಮೆ” ಎಂದು ಬರೆದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಇದೀಗ ದಂಪತಿಯನ್ನು ಹುಡುಕುವ ಕಾರ್ಯ ಮುಂದುವರಿದಿದ್ದು, ಸ್ಥಳೀಯ ಪೊಲೀಸರ ಸಹಾಯದಿಂದ ಶೋಧ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article