COSTALNEWS/. ರಾಮಕ್ಷತ್ರೀಯ ಸಂಘದ ಜಿಲ್ಲಾಧ್ಯಕ್ಷರಾಗಿ ಪದ್ಮನಾಭ ಕೊತ್ವಾಲ್ ಆಯ್ಕೆ: ಮಾದರಿ ನಾಯಕತ್ವಕ್ಕೆ ಒಲಿದ ಜವಾಬ್ದಾರಿ
Sunday, August 23, 2026
ಉಪ್ಪೂರು: ಉಡುಪಿ ಜಿಲ್ಲಾ ರಾಮಕ್ಷತ್ರೀಯ ಸಮುದಾಯದ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಶ್ರೀ ಪದ್ಮನಾಭ ಕೊತ್ವಾಲ್ ಗಂಗೊಳ್ಳಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪ್ಪೂರಿನ ಶ್ರೀ ರಾಮಮಂದಿರದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ಮುಂದಿನ 2 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನೆರವೇರಿತು.
ಬಳ್ಳಾರಿಯ ‘ಶ್ರೀ ವರ್ಷಿಣಿ ಎಂಟರ್ ಪ್ರೈಸಸ್’ ಸಂಸ್ಥೆಯ ಮಾಲಕರಾಗಿರುವ ಪದ್ಮನಾಭ ಕೊತ್ವಾಲ್ ಅವರು ಸಮಾಜಮುಖಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ನುಡಿದಂತೆ ನಡೆಯುವ ಅವರ ಸರಳ ವ್ಯಕ್ತಿತ್ವ ಮತ್ತು ಸಮಾಜದ ಏಳಿಗೆಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಸಮುದಾಯದ ಬಾಂಧವರು ಅವರಿಗೆ ಈ ಮಹತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ.
ಗಣ್ಯರ ಶುಭಹಾರೈಕೆ
ಕಾರ್ಯಕ್ರಮಕ್ಕೆ ಭೇಟಿ ನೀಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟೆಹೊಳೆ ಅವರು ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿ, ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಪೂರ್ಣ ಸಹಕಾರದ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೋಟೇಕೇರಿ ನಾಗಬನ, ಗುಜ್ಜಾಡಿ ಲೈಟ್ ಹೌಸ್ ಸಮಿತಿ ಸೇರಿದಂತೆ ಕುಂದಾಪುರ, ಬೈಂದೂರು ಹಾಗೂ ಉಡುಪಿ ತಾಲೂಕಿನ ಸಮಸ್ತ ರಾಮಕ್ಷತ್ರೀಯ ಬಾಂಧವರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.